ಕುಣಿತದ ಧ್ವನಿತ

ತಟಪಟ ತಟ್ಟುತ ಒಟ್ಟಿನಲಿ
ಕೋಲಿಂ ಕೆಲವರು ಹೊಲದಲ್ಲಿ,
ಕಿಣಿಕಿಣಿ ಮಣಿಯಿಂ ಕುಣಿಸುತಲಿ,
ಗಲಗಲ ಬಾಲರ ಒಲಿಸುತಲಿ.

ಡಂ ಢಂ ಡಾಂಬರ ಗಡಗಡಿಸಿ
ಪೆಂಪಾಪೆಂಪೆಂದು ಪೇಳಿರಿಸಿ,
ಲಲ್ಲಾಲ್ಲೆನ್ನುತ ಸೊಲ್ಲನೊಂದು
ಬಾಯೊಳು ಸಾಯಲು ಹಾತೊರೆದು!

ರತ್ನದ ಚಿನ್ನದ ಬಣ್ಣಗಳು,
ಹೊಳಪಿನ ಸುಲಲಿತ ಈ ಕಲೆಯು,
ಸೋಜಿಗದುಜ್ಜಿದ ಗೆಜ್ಜೆಯನು
ಕಾಲಲಿ ಸಾಲಲಿ ಠಣಠಣಿಸಿ!

ಆಚಿಂದೀಚೆಗೆ ಹಾಯುತಲಿ;
ಆನಂದದಾಡುತ ಹಾರುತಲಿ;
ಬಗ್ಗುತ ಏಳುತ ತಿರುಹುತಲು,
ಸಾಲಿಂ ಕೋಲ್ಗಳ ಕಟಕಟಿಸಿ.

ಸುಗ್ಗಿಯಲಗ್ಗದ ಸಗ್ಗವಿದು
ಒಗ್ಗುವ ಒಮ್ಮನದೊಲುಮೆಯಿದು;
ತಾಳದ ಗಣಗಣ ಪ್ರತಿಧ್ವನಿಯು,
ಮಾನಸಿಕಾಂಕ್ಷೆಯ ಸಿರಿಯೊಲವು.

ಕುಣುಕುಣು ಕುಲುಕುತ ಅಂಗಗಳೂ
ಥಕಥಕ ತಟ್ಟುತ ಪಾರುತಲಿ,
ಕೂಟದೊಳಾಟದ ಪಠನವಿದು
ಉತ್ಸವದಾಡಲು ಸಿರಿಸುರಿಯುಂ!

ಬಯಲಿನ ನಡುವಣ ಕುಣಿಬನವೂ,
ಬೆವರಿನ ದಣಿಮಣಿ ಚಿನ್ಮಣಿಯುಂ,
ನೋಡಲದಚ್ಚರಿ! ನಿಟ್ಟುಸುತ
ಆಡುವ ಬಗೆ-ಗೆಲು ಹುಟ್ಟಿಸುತ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೧೯
Next post ‘ಶ್ರೀ’ ಅವರಿಗೆ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

cheap jordans|wholesale air max|wholesale jordans|wholesale jewelry|wholesale jerseys